ಭೂಮಿಕಾಗೆ ನಾಲ್ಕನೇ ಹಂತದ ಕ್ಯಾನ್ಸರ್ ಇರುವುದನ್ನು ತಿಳಿದುಕೊಂಡ ಶಕುಂತಲಾ, ಆ ರಹಸ್ಯವನ್ನು ಎಲ್ಲರ ಮುಂದೆ ಬಯಲು ಮಾಡಿ ಸಂಭ್ರಮಿಸುತ್ತಾಳೆ. ಶಕುಂತಲಾಳ ಈ ಕ್ರೌರ್ಯಕ್ಕೆ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಗೌತಮ್ ಪ್ರೀತಿಯಿಂದ ಭೂಮಿಕಾ ಈ ಮಾರಣಾಂತಿಕ ಕಾಯಿಲೆಯನ್ನು ಗೆಲ್ಲುತ್ತಾಳಾ ಎಂಬ ಕುತೂಹಲ ಮೂಡಿದೆ.