
ನವದೆಹಲಿ (ಆ.7): ಕೆನೆಪದರ ನೀತಿಯು, ಎಸ್ಸಿ, ಎಸ್ಟಿ ಸಮುದಾಯದ ಮೀಸಲಿಗೆ ಅನ್ವಯವಾಗದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ. ಈ ಮೂಲಕ ಎಸ್ಸಿ, ಎಸ್ಟಿ ಮೀಸಲು ವೇಳೆ ಕೆನೆಪದರ ತತ್ವ ಅನ್ವಯಿಸಬೇಕು ಮತ್ತು ಸರ್ಕಾರಿ ನೇಮಕದ ವೇಳೆ ಹೆಚ್ಚು ನ್ಯಾಯಯುತವಾದ ಮೀಸಲು ವ್ಯವಸ್ಥೆಗೆ ನೀತಿ ರೂಪಿಸಬೇಕು ಎಂದು ಕೋರಿದ್ದ ಅರ್ಜಿಗೆ ತನ್ನ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಈ ಕುರಿತು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು, ಸಂವಿಧಾನದ ಮೂಲಭೂತ ಹಕ್ಕುಗಳ ಯಾವುದೇ ಉಲ್ಲಂಘನೆಯನ್ನು ಎತ್ತಿತೋರಿಸುತ್ತಿಲ್ಲ ಎಂದು ಹೇಳಿದೆ.
ಜೊತೆಗೆ ಎಸ್ಸಿ, ಎಸ್ಟಿಗೆ ಕೆನೆಪದರ ನೀತಿ ಅನ್ವಯಿಸುತ್ತದೆ ಎಂದು ಎಲ್ಲಿಯೂ ನಿರ್ದಿಷ್ಟವಾಗಿ ಪ್ರತಿಪಾದಿಸಲಾಗಿಲ್ಲ. ಕೆನೆಪದರದ ಕುರಿತು ಮಾಡಿರುವ ಉಲ್ಲೇಖವು, ಇತರೆ ಹಿಂದುಳಿದ ವರ್ಗ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಮೀಸಲಿಗೆ ಒಳಪಟ್ಟ ಸಾಮಾನ್ಯ ಅವಲೋಕನದಂತಿದೆ ಎಂದು ಕೇಂದ್ರ ಸರ್ಕಾರದ ವಾದಿಸಿದೆ. ಅಲ್ಲದೆ ತನ್ನ ವಾದಕ್ಕೆ ಪೂರಕವಾಗಿ ಅಶೋಕ್ ಕುಮಾರ್ ಠಾಕೂರ್ ಕೇಸಿನಲ್ಲಿ ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠವು, ಕೆನೆಪದರ ನೀತಿ ಎಸ್ಸಿ, ಎಸ್ಟಿಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಪಪಡಿಸಿದೆ ಎಂದು ತನ್ನ ಅಫಿಡವಿಟ್ನಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ.
ಕೆನೆಪದರ ಎಂದರೆ?
1992ರಲ್ಲಿ ಸುಪ್ರೀಂಕೋರ್ಟ್ ಮಂಡಲ್ ತೀರ್ಪಿನಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಶ್ರೀಮಂತರನ್ನು ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರವೇಶದಿಂದ ಹೊರಗೆ ಇಟ್ಟಿತ್ತು.