Bhagirath Choudhary: ಸೌತೆಕಾಯಿಗೆ ₹99 ಲಕ್ಷ ಸಬ್ಸಿಡಿ ಪಡೆದ ಸಚಿವನಿಂದ ಹಣ ವಾಪಸ್‌!

Author:



ನವದೆಹಲಿ (ಜು.29): ತಮ್ಮ ರಾಜಸ್ಥಾನದ ಜಮೀನಿನಲ್ಲಿ ಸೌತೆಕಾಯಿ ಬೆಳೆಯಲೆಂದು ತಮ್ಮದೇ ಸಚಿವಾಲಯದ ಒಂದು ಯೋಜನೆಯಡಿ 99 ಲಕ್ಷ ರು. ಸಬ್ಸಿಡಿ ಪಡೆದಿದ್ದ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ಕೇಂದ್ರ ರಾಜ್ಯ ಸಚಿವ ಭಗೀರಥ್ ಚೌಧರಿ, ಇದೀಗ ಅಷ್ಟೂ ಹಣವನ್ನು ಮರಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರವು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.

ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರು ಕೇಳಿದ್ದ ಪ್ರಶ್ನೆಗೆ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ರಾಮನಾಥ್‌ ಠಾಕೂರ್‌ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ. ‘ಸ್ಕೀಂಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗೆ ಹಣವನ್ನು ಮರಳಿಸಿದ್ದಾಗಿ ಚೌಧರಿ ತಿಳಿಸಿದ್ದಾರೆ. ಆ ಮೊತ್ತವನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಗೆ(ಎನ್‌ಎಚ್‌ಬಿ) ವರ್ಗಾಯಿಸುವಂತೆ ಬ್ಯಾಂಕ್‌ಗೆ ಸೂಚಿಸಲಾಗಿದೆ’ ಎಂದು ತಿಳಿಸಲಾಗಿದೆ.

ವಾಣಿಜ್ಯ ತೋಟಗಾರಿಕೆಯ ಅಭಿವೃದ್ಧಿ ಯೋಜನೆಯಡಿ ಸಲ್ಲಿಕೆಯಾಗಿದ್ದ 467 ಅರ್ಜಿಗಳಿಗೆ, 2025ರಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಂಡಳಿ ಅನುಮೋದನೆ ನೀಡಿತ್ತು. ಇದರಲ್ಲಿ ಚೌಧರಿಯವರ 16,592 ಚದರ ಮೀ.ನ ಜಮೀನೂ ಸೇರಿತ್ತು. ಇದಕ್ಕೆ, ‘ನಾನೂ ರೈತ’ ಎಂಬ ಸ್ಪಷ್ಟನೆ ಅವರಿಂದ ಬಂದಿತ್ತು.



Movie News